ಮೈಸೂರು ಮುಡಾದಲ್ಲಿ ಮುಖ್ಯಮಂತ್ರಿ Siddaramaiah ನವರು ವಿವಾದಾಸ್ಪದ ಜಮೀನನ್ನು ಆಧಾರವಾಗಿಟ್ಟುಕೊಂಡು ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ 14 ನಿವೇಶನಗಳನ್ನು ತಮ್ಮ ಪತ್ನಿಯವರಿಗೆ ಮಂಜೂರು ಮಾಡಿಸಿಕೊಂಡಿದ್ದಾರೆ. ಇದರಿಂದ 5,000 ನಿವೇಶನಗಳ ಭ್ರಷ್ಟ ವ್ಯವಹಾರ ಹೊರಗೆ ಬಾರದಂತೆ ಮುಖ್ಯಮಂತ್ರಿಗಳೇ ರಕ್ಷಣೆಯಾಗಿ ನಿಂತಿರುವುದು ಸ್ಪಷ್ಟವಾಗಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಆಗಿರುವುದನ್ನು ಸ್ವತಃ ಒಪ್ಪಿಕೊಂಡರೂ ರಾಜೀನಾಮೆ ನೀಡದೆ ಭಂಡತನ ಪ್ರದರ್ಶಿಸುವ ಮುಖ್ಯಮಂತ್ರಿಗಳ ಹಾಗೂ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನದ ಸ್ವರೂಪ ಪಡೆದಿರುವ ‘ಮೈಸೂರು ಚಲೋ‘ ಪಾದಯಾತ್ರೆಯಲ್ಲಿ ವಿಜಯವಾಣಿ ದಿನಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನ.