ಶತಮಾನಗಳ ಕನಸು ಪವಿತ್ರ ರಾಮಮಂದಿರ ನಿರ್ಮಾಣದಲ್ಲಿ ಭಾರತದ ಸಾರ್ವಭೌಮತ್ವದ ಶಕ್ತಿ ಅಡಗಿದೆ. ಭಾರತೀಯತೆಯ ಸತ್ವ ಅಡಗಿದೆ, ರಾಮನ ಜನ್ಮಸ್ಥಾನದಲ್ಲೇ ರಾಮನಿಗೆ ನೆಲೆ ದೊರಕಿಸಿಕೊಡಲು ಸಾಧ್ಯವಾಗದಿದ್ದರೆ ಭವಿಷ್ಯದಲ್ಲಿ ನೈಜ ಭಾರತೀಯತೆಗೆ ನೆಲೆ ಉಳಿಸಲು ಸಾಧ್ಯವೇ ? ಎಂಬ ಛಲ ಮೂಡಿಸುವ ಪ್ರಶ್ನೆಗಳು ಕೋಟ್ಯಂತರ ದೇಶಭಕ್ತ ಕಾರ್ಯಕರ್ತರಲ್ಲಿ “ಪ್ರಾಣ ಕೊಟ್ಟಾದರೂ ಸರಿ ಮಂದಿರವಲ್ಲೇ ಕಟ್ಟುವೆವು” ಎಂದು ಗೈದ ಶಪಥ ಇದೀಗ ಈಡೇರಿ, ‘ಹನುಮನೂರಿನಿಂದಲೇ ಬಾಲರಾಮನು ಅಯೋಧ್ಯೆ ಗುಡಿ ಬೆಳಗುತ್ತಿರುವ’ ಕುರಿತು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ನನ್ನ ವಿಶೇಷ ಲೇಖನ.